ಯಕ್ಷಗಾನದ ಬೆಳವಣಿಗೆಗೆ ಚರ್ಚೆ ಅಗತ್ಯ: ಸಾಮಗ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಸೋಮವಾರ, ಜನವರಿ 6 , 2014
|
ಜನವರಿ 6, 2014
|
ಯಕ್ಷಗಾನದ ಬೆಳವಣಿಗೆಗೆ ಚರ್ಚೆ ಅಗತ್ಯ: ಸಾಮಗ
ಸುರತ್ಕಲ್ :
ಯಕ್ಷಗಾನದ ಬೆಳವಣಿಗೆಗೆ ಚರ್ಚೆ ಅಗತ್ಯ. ಅಲ್ಲದೇ ಕಲಾವಿದರಿಗೆ ಕಲೆಯ ಬಗ್ಗೆ ಅತಪ್ತಿ ಇದ್ದಲ್ಲಿ ಅದು ಕಲೆಯ ಬೆಳವಣಿಗೆಗೆ ಸಹಕಾರಿಯಾಗುವುದು ಸಾಧ್ಯ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಮಾಜಿ ಅಧ್ಯಕ್ಷ ಪ್ರೊ. ಎಂ .ಎಲ್. ಸಾಮಗ ಹೇಳಿದರು.
ಕುಳಾಯಿ ಶ್ರೀ ವಿಷ್ಣುಮೂರ್ತಿ ಯಕ್ಷಗಾನ ಮಂಡಳಿಯ ಯಕ್ಷಗಾನ ರಂಗಪ್ರದರ್ಶನದ ದಶಮ ಸಂಭ್ರಮ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಭಾನುವಾರ ಅವರು ಮಾತನಾಡಿ,ಯಕ್ಷಗಾನ ಬೋಧನೆಯಲ್ಲಿ ಸ್ಪಷ್ಟತೆ ಮತ್ತು ಖಚಿತತೆ ಇರಬೇಕು. ಯಕ್ಷಗಾನದ ಭವಿಷ್ಯ ಉಜ್ವಲವಾಗಿದೆ ಎಂದರು.
ಈ ಸಂದರ್ಭ ರಾಜ್ಯ ಪ್ರಶಸ್ತಿ ವಿಜೇತ ಯಕ್ಷಗಾನ ಕಲಾವಿದ ನೆಲ್ಲಿಕಟ್ಟೆ ನಾರಾಯಣ ಹಾಸ್ಯಗಾರಿಗೆ ಸನ್ಮಾನ, ಮಂಡಳಿಯ ಸಂಚಾಲಕರಾಗಿ ಸೇವೆ ಸಲ್ಲಿಸುತ್ತಿರುವ ವಾಸುದೇವ ಆಚಾರ್ಯ ಕುಳಾಯಿ ಅವರಿಗೆ ಅಭಿನಂದನೆ, ಮಂಡಳಿಯ ಯಕ್ಷಗಾನ ಗುರು ಡಾ. ದಿನಕರ್ ಎಸ್. ಪಚ್ಚನಾಡಿ ಅವರಿಗೆ ಗುರುವಂದನೆ ನಡೆಯಿತು. ಧಮದರ್ಶಿ ಹರಿಕಷ್ಣ ಪುನರೂರು ಮುಖ್ಯ ಅತಿಥಿಯಾಗಿ ಮಾತನಾಡಿ, ನಮ್ಮ ಸಂಸ್ಕೃತಿ ಉಳಿಸಲು ಯಕ್ಷಗಾನಕ್ಕೆ ಪ್ರೋತ್ಸಾಹ ಅತೀ ಅಗತ್ಯ ಎಂದರು.
ಕರ್ಣಾಟಕ ಬ್ಯಾಂಕ್ನ ಮಾಜಿ ಅಧ್ಯಕ್ಷ ಎಂ. ಎಸ್. ಕಷ್ಣ ಭಟ್ ಉದ್ಘಾಟಿಸಿ, ಭಾರತೀಯ ಸಂಸ್ಕೃತಿ ಉಳಿವಿಗೆ ಯಕ್ಷಗಾನಕ್ಕೆ ಪ್ರೋತ್ಸಾಹ ಅಗತ್ಯ ಎಂದರು. ವೇದಮೂರ್ತಿ ಕುಡುಪು ನರಸಿಂಹ ತಂತ್ರಿ ಆರ್ಶೀರ್ವಚನ ವಿತ್ತರು.
ಸುರತ್ಕಲ್ ಪುರಾತನ ಮಾರಿಯಮ್ಮ ದೇವಸ್ಥಾನದ ಆಡಳಿತ ಮೊಕ್ತೇಸರ ಚಂದಪ್ಪ ಗುರಿಕಾರ್, ಯಕ್ಷಗಾನ ವಿದ್ವಾಂಸ ಪೊಳಲಿ ನಿತ್ಯಾನಂದ ಕಾರಂತ, ಮಾಜಿ ಮೇಯರ್ ಗಣೇಶ್ ಹೊಸಬೆಟ್ಟು, ಉದ್ಯಮಿ ಎಂ.ಜೆ. ಶೆಟ್ಟಿ, ದೇವಸ್ಥಾನದ ಅನುವಂಶಿಕ ಮೊಕ್ತೇಸರ ಕಷ್ಣ ಹೆಬ್ಬಾರ್, ವಿಷ್ಣುಮೂರ್ತಿ ಭಜನಾ ಮಂಡಳಿಯ ಅಧ್ಯಕ್ಷ ರಾಮ ಐತಾಳ್, ದೇವಸ್ಥಾನದ ಸೇವಾ ಸಮಿತಿಯ ಪಠೇಲ್ ಶಂಕರ್ ರೆ, ಎಂ. ಸದಾಶಿವ ಮೊದಲಾದವರು ಉಪಸ್ಥಿತರಿದ್ದರು. ಯಕ್ಷಗಾನ ಅರ್ಥಧಾರಿ ಸೇರಾಜೆ ಸೀತಾರಾಮ ಭಟ್ ಅಭಿನಂದನಾ ಭಾಷಣ ಮಾಡಿದರು. ಹರಿಪ್ರಸಾದ್ ಕಾರಂತ ಮತ್ತು ತಂಡದವರು ಯಕ್ಷಗಾನ ಶೆಲಿಯಲ್ಲಿ ಪ್ರಾರ್ಥನೆ ನಡೆಸಿದರು. ಎಂ. ವಾಸುದೇವ ಹೆಬ್ಬಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ವೆಂಕ ಶೆಟ್ಟಿಗಾರ್ ಸ್ವಾಗತಿಸಿದರು. ಎಂ. ವೆಂಕಟ್ರಾವ್ , ಎಸ್. ವಾಸುದೇವ ರಾವ್, ಪ್ರಶಾಂತ್ ಹೊಳ್ಳ ಸನ್ಮಾನ ಪತ್ರ ವಾಚಿಸಿದರು. ಯಕ್ಷನಂದನ ಪಿ.ವಿ. ಐತಾಳರ ಇಂಗ್ಲೀಷ್ ಯಕ್ಷಗಾನ ಬಳಗ ಸಂಚಾಲಕ ಪಿ. ಸಂತೋಷ್ ಐತಾಳ್ ನಿರೂಪಿಸಿದರು. ಯೋಗೀಶ್ ಸನಿಲ್ ಕುಳಾಯಿ ವಂದಿಸಿದರು.
ಉಮ್ಮಳಿಸಿದ ದುಃಖ: ಸನ್ಮಾನಕ್ಕೆ ಉತ್ತರಿಸಿದ ವಾಸುದೇವ ಅಚಾರ್ಯ, ತನಗೆ ಇಷ್ಟು ವರ್ಷ ಮಂಡಳಿಯ ಸಂಚಾಲಕನಾಗಿ ಯಕ್ಷಗಾನದ ಸೇವೆ ಸಲ್ಲಿಸಲು ಅವಕಾಶ ದೊರಕಿರುವುದು ದೊಡ್ಡ ಭಾಗ್ಯ ಅದರೆ ಕುಳಾಯಿಯಲ್ಲಿ ಸುಮಾರು 13 ವರ್ಷ ಹಿಂದೆ ಯಕ್ಷಗಾನ ಮಂಡಳಿ ಅರಂಭಿಸಲು ಕಾರಣರಾಗಿದ್ದ, ನಮಗೆಲ್ಲರಿಗೆ ಗುರು ಸಮಾನರಾಗಿದ್ದ ಪ್ರಸಿದ್ಧ ಯಕ್ಷಗಾನ ಕಲಾವಿದ ಕುಳಾಯಿ ದೇವಣ್ಣ ಶೆಟ್ಟಿ ಅವರು ಈ ಕಾರ್ಯಕ್ರಮಲ್ಲಿ ಭಾಗವಹಿಸಬೇಕಿತ್ತು ಅನಾರೋಗ್ಯದ ಕಾರಣ ಅವರು ಭಾಗವಹಿಸಿಲ್ಲ ಎಂದು ಹೇಳುವಷ್ಟರಲ್ಲಿ ಅವರು ಮಾತು ಮಂದುವರಿಸದೆ ಗದ್ಗದಿತರಾದರು.
ಕೃಪೆ :
http://www.vijaykarnataka.com
|
|
|